ಕನಸಿನ ಭಾರತ ದೇಶದ ಪತ್ರಿಕಾರಂಗ ಇತಿಹಾಸದಲ್ಲಿ ವಿನೂತನ ಪ್ರಯತ್ನ ಇದಾಗಿದೆ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಮೂಲಕ ಜನಜಾಗೃತಿ, ದೇಶಾಭಿಮಾನ, ಭ್ರಷ್ಠಾಚಾರ ನಿರ್ಮೂಲನೆ, ಸಮಾನತೆಯ ಆಶೆಯಗಳೊಂದಿಗೆ ಕನಸಿನ ಭಾರತವು 2011 ರಿಂದ ನಿರಂತರ ಕಾರ್ಯ ನಿರ್ವಹಿಸುತ್ತಿದೆ. ಕನಸಿನ ಭಾರತವು ಸಮೂಹ ಸಂಸ್ಥೆಯಾಗಿದ್ದು,ಇಲ್ಲಿ ಯಾರು ಕೆಲಸಗಾರರು ಇರುವುದಿಲ್ಲ. ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಪಾಲುದಾರರು. ಈ ಸಂಸ್ಥೆಯಲ್ಲಿ ಭಾಗವಹಿಸುವವರು ತಮ್ಮ ಜ್ಞಾನ, ಹೊಸ ಪ್ರಯೋಗ ಅಥವಾ ದೇಶದ ಕನಸನ್ನು ನನಸಾಗಿಸಲು ವೇದಿಕೆ ಇದಾಗಿದೆ. ಬಲಿಷ್ಠ ಭಾರತ ಕಟ್ಟಲು ದೇಶಾಭಿಮಾನ ಮತ್ತು ಜನಜಾಗೃತಿಯಿಂದ ಮಾತ್ರ ಸಾಧ್ಯ ಈ ದಿಶೆಯಲ್ಲಿ ಯುವ ಸಮುದಾಯದ ಬೆಂಬಲದೊಂದಿಗೆ ಬದಲಾವಣೆಗಾಗಿ ಈ ಪ್ರಯತ್ನ. ಕನಸಿನ ಭಾರತ (ಮಾಸ/ಪಾಕ್ಷಿಕ/ವಾರ ) ಪತ್ರಿಕೆಗಳು ನಡೆಯುತ್ತಿದ್ದು, ಸದ್ಯದಲ್ಲೇ ದಿನ ಪತ್ರಿಕೆ ಪ್ರಾರಂಭಿಸಲಾಗುವುದು. Online news portal ಜೊತೆಗೆ Web Tv ಪ್ರಾರಂಭಿಸಲಾಗಿದೆ. ಸುದ್ಧಿಯನ್ನು ಆಳುವವರಿಂದ ಜನರಿಗೆ ಮತ್ತು ಜನ ಸಾಮಾನ್ಯರ ನೋವು ನಲಿವುಗಳ ಕಷ್ಟಗಳ ಸುದ್ಧಿಯನ್ನು ಆಳುವವರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ವಿಷಯ- ವಿಚಾರಗಳ ವಿಶ್ಲೇಷಣೆ, ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಮೂಲಕ ನಾಡಿನ ಪ್ರತಿಭೆಗಳನ್ನು ಅನಾವರಣ ಮಾಡಲಾಗುತ್ತದೆ.ಮಾಹಿತಿ, ಜಾಗೃತಿ ಮತ್ತು ದೇಶಾಭಿಮಾನ ಬೆಳೆಸುವ ದೊಡ್ಡ ಜವಾಬ್ದಾರಿ ಇಂದಿನ ಸಂದರ್ಭದಲ್ಲಿ ಇದ್ದು, ಮಾಧ್ಯಮದ ಮೂಲಕ ನವ ವಿಚಾರವಂತರಿಗೆ ಅವಕಾಶ, ಮಾನಸಿಕ ಭಯೋತ್ಪಾದನೆಯನ್ನು ತಡೆದು ಜನರಿಗೆ ನೆಮ್ಮದಿ ಮತ್ತು ಸಮಾನತೆಯ ಜೀವನ ಕಟ್ಟಲು ನಮ್ಮದೊಂದು ಪ್ರಯತ್ನ.ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಪತ್ರಿಕೆ ತನ್ನದೆ ಛಾಪು ಬೀರುತ್ತಿದೆ.ಕಾನೂನು ಪ್ರಕಾರ ಕನಸಿನ ಭಾರತ REGISTRAR OF NEWSPAPERS FOR INDIA (Government of India) ಮಾಸ ( KARKAN/2011/45279 ) ಪಾಕ್ಷಿಕ ( KARKAN26141 ) ವಾರ ( KARKAN/2017/73352 ) ಮತ್ತು ದಿನ ( KARKAN/2015/66206 ) ನೋಂದಾವಣೆ ಆಗಿದ್ದು, ಕಾನೂನು ರೀತ್ಯ ಎಲ್ಲ ಹಂತಗಳನ್ನು ಪೂರೈಸುತ್ತಾ ಬಂದಿದೆ. ಕನಸಿನ ಭಾರತದಲ್ಲಿ ಕಾರ್ಯನಿರ್ವಹಿಸುವವರನ್ನು ಕಾನೂನು ರೀತ್ಯ ಪಾಲುದಾರನಾಗಿಸಲು 2019 ರಲ್ಲಿ Kanasina Bharatha Media LLP ನೋಂದಾವಣೆ ಮಾಡಿದ್ದು, ಪ್ರಯತ್ನ ಮತ್ತು ಭಾಗವಹಿಸುವ ಹಂತವನ್ನು ನೋಡಿ 2 ವರ್ಷದ ಒಳಗಾಗಿ ಪಾಲುದಾರರ ಹಂಚಿಕೆ ಪೂರ್ಣಗೊಳಿಸಲಾಗುವುದು. ನಮ್ಮ ಟೀಮ್ ಆರ್ಥಿಕ ಅಭಿವೃದ್ಧಿ ಮತ್ತು ಪೂರ್ಣ ಅವಧಿಗೆ ಕೆಲಸ ಮಾಡಲು ಬೇರೆ ಪತ್ರಿಕೆ/ಟಿ.ವಿ ಚಾನಲ್ ಜಾಹೀರಾತು, ಬಸ್ ಜಾಹೀರಾತು, ಚಿತ್ರಮಂದಿರದಲ್ಲಿ ಜಾಹೀರಾತು ಇನ್ನು ಮುಂತಾದವುಗಳನ್ನು ಕಂಪನಿ ಮೂಲಕ ಮಾಡಲಾಗುತ್ತದೆ ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ KANASINA BHARATHA Pvt.Ltd ನೋಡಿ. ಸಮಾಜದ ಅಭ್ಯುದಯ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ಭದ್ರತೆ, ಸಾಮಾಜಿಕ ಸಮಾನತೆ, ಆರ್ಥಿಕ ಸಮಾನತೆ ಮುಂತಾದ ಕನಸುಗಳ ಸಾಗರ. ಇಂತಹ ಹಲವಾರು ದೃಷ್ಟಿಕೋನದ ಈ ಸಮೂಹದಲ್ಲಿ ತಾವು ಭಾಗವಹಿಸಿ ಈ ಪ್ರಯತ್ನಕ್ಕೆ ತಮ್ಮ ಬೆಂಬಲದೊಂದಿಗೆ ಭವ್ಯ ಭಾರತದ ಕನಸು ನನಸಾಗಿಸಿ.
ಅಜೀವ ಸದಸ್ಯತ್ವ : ಕನಸಿನ ಭಾರತ ಪತ್ರಿಕೆಯಲ್ಲಿ ಸುದ್ಧಿ, ಲೇಖನಗಳ ಜೊತೆಗೆ ವಿಶ್ಲೇಷಣೆ ಆಸಕ್ತ ಓದುಗರಿಗೆ ಹಲವಾರು ಮೂಲಗಳಿಂದ ತಲುಪಿಸಲಾಗುತ್ತದೆ. ಕನಸಿನ ಭಾರತ ಮಾಸ ಪತ್ರಿಕೆಯು ದೇಶಾಭಿಮಾನ, ಭಾಷಾಭಿಮಾನ, ಇತಿಹಾಸ, ಸಂಸ್ಕøತಿ, ಕೃಷಿ, ಆಧ್ಯಾತ್ಮ, ಕಾನೂನು, ರಾಜಕೀಯ ಮಹಿಳಾ ಚಿಂತನೆಗಳು, ವೈಜ್ಞಾನಿಕ, ಶಿಕ್ಷಣ,ವ್ಯಾಪಾರ, ವ್ಯವಹಾರ,ಚಲನಚಿತ್ರ ಮತ್ತು ಕ್ರೀಡೆ ಇಂತಹ ಹಲವಾರು ವಿಶೇಷಗಳ ಬೃಹತ ಆಗರ, ಇಂತಹ ಮಾಸ ಪತ್ರಿಕೆಯನ್ನು ಜೀವನ ಪರ್ಯಂತ ಓದಲು ಮತ್ತು ಸಂಗ್ರಹ ಯೋಗ್ಯ ಮಾಹಿತಿ, ಆಧಾರದ ಈ ಪತ್ರಿಕೆಗೆ ಚಂದಾದಾರ ಆಗುವ ಮೂಲಕ ಸಮಾಜಸೇವೆ ಮಾಡಬಹುದು.
ಕನಸಿನ ಭಾರತ ಮಾಸ – 6150:: ಒಂದು ಸಾರಿ 6150 ಹಣ ನೀಡಿ ಕನಸಿನ ಭಾರತ ಮಾಸ ಪತ್ರಿಕೆಯ ಸದಸ್ಯತ್ವ ಪಡೆದರೆ, ಜೀವನ ಪರ್ಯಂತ ಪತ್ರಿಕೆ ಮನೆ ಬಾಗಿಲಿಗೆ ಅಂಚೆ/ಕೊರಿಯರ್/ನೇರವಾಗಿ ತಲುಪುತ್ತದೆ. ಅದ್ಬುತವಾದ ವಿಚಾರಗಳ ತಿಳಿದುಕೊಳ್ಳುವ ಮೂಲಕ ಜ್ಞಾನದಾಹ ತೀರಿಸಿಕೊಳ್ಳಬಹುದು. ಈ ಯೋಜನೆಯು ಸದ್ಯ ಕರ್ನಾಟಕ ರಾಜ್ಯದ 16,000 ಜನರಿಗೆ ಮಾತ್ರ ದೊರೆಯುತ್ತದೆ.
16000 ಜನರ 6150 ಹಣವನ್ನು ಬ್ಯಾಂಕಿನಲ್ಲಿ ಎಫ್.ಡಿ ಇಟ್ಟು ಅದರಿಂದ ಬರುವ ಲಾಭದಲ್ಲಿ ಪತ್ರಿಕೆ ಪ್ರಕಟಣೆ,ಓದುಗರಿಗೆ ತಲುಪಿಸುವುದ ಜೊತೆಗೆ ಪ್ರತಿ ವರ್ಷ ಒಂದು ಸಾರಿ ಇಬ್ಬರು ಸೈನಿಕರು ಮತ್ತು ಮೂವರು ರೈತರಿಗೆ ತಲಾ 25,000 ಗೌರವ ಹಣದೊಂದಿಗೆ ಸನ್ಮಾನಿಸಲಾಗುವುದು. ಸೈನಿಕರ ದೇಶ ಸೇವೆ ಮತ್ತು ರೈತರ ಶ್ರಮವನ್ನು ಆಧುನಿಕ ಜಗತ್ತಿನ ಯುವ ಪೀಳಿಗೆಗೆ ಪರಿಚಯಿಸುವ ಒಂದು ಪ್ರಯತ್ನ. ಅದು ಈ ಕಾರ್ಯಕ್ರಮವನ್ನು ರಾಜ್ಯದ ಹಳ್ಳಿ ಆಯೋಜನೆ ಮಾಡಿ ನಮ್ಮ ಹಳ್ಳಿಗಳ ಪರಿಸ್ಥಿತಿ ಮತ್ತು ಸಂಸ್ಕøತಿಯನ್ನು ನಾಡಿಗೆ ಪರಿಚಯಿಸುವ ವಿನೂತನ ಪ್ರಯತ್ನ. ಸೈನಿಕರು ಮತ್ತು ರೈತರು ನಮ್ಮ ಎರಡು ಕಣ್ಣುಗಳಿದಂತೆ ಪ್ರೋತ್ಸಾಹ, ದೇಶಾಭಿಮಾನ ಮೂಡಿಸುವ ಪ್ರಾಮಾಣಿಕ ಪ್ರಯತ್ನ. ರಾಜ್ಯದ ಯಾವುದೇ ಸೈನಿಕರಿಗೆ ಗಡಿಯಲ್ಲಿ ತೊಂದರೆ ಆದಾಗ ತುರ್ತು ಸಹಾಯ ಮಾಡಲಾಗುವುದು ಅದು ಗರಿಷ್ಠ 50,000 ವರೆಗೆ ಸಹಾಯ ಮಾಡುವ ಜೊತೆಗೆ ಅಂತಹ ವಿಪತ್ತು ಸಮಯದಲ್ಲಿ ಕುಟುಂಬದ ನೆರವಿಗೆ ನಿಲ್ಲುವುದು. ಜ್ಞಾನದಾಹ ನಿಗಿಸುವ ಪತ್ರಿಕೆ ಜೊತೆಗೆ ದೇಶಾಭಿಮಾನದ ಸಮಾಜ ಸೇವೆಗೆ ತಮ್ಮ ಸಹಾಯ ಮಾಡಿ.
ಚಂದಾದಾರರಿಗೆ ಲಾಭಗಳು
- ಜೀವನ ಪರ್ಯಂತ ಮಾಸ ಪತ್ರಿಕೆ ದೊರೆಯುತ್ತದೆ.
- ವರ್ಷದಲ್ಲಿ ಒಂದು ಬಾರಿ ತಮ್ಮ ಅಥವಾ ತಾವು ಸೂಚಿಸಿದವರ ಹುಟ್ಟು ಹಬ್ಬ ಅಥವಾ ಮದುವೆ ವಾರ್ಷಿಕೋತ್ಸವದ ಶುಭಾಷಗಳನ್ನು ಪತ್ರಿಕೆಯ ವತಿಯಿಂದ ಉಚಿತವಾಗಿ ಪ್ರಕಟಿಸಲಾಗುವುದು.
- ಚಂದಾದಾರರ ಜಾಹೀರಾತುಗಳ ಮೇಲೆ ಶೇ. 30ರಷ್ಟು ರಿಯಾಯಿತಿ ನೀಡಲಾಗುವುದು.
- ವಾರ್ಷಿಕ ಪ್ರಶಸ್ತಿ ಕಾರ್ಯಕ್ರಮಕ್ಕೆ ವಿಶೇಷವಾಗಿ ಆಹ್ವಾನಿಸಲಾಗುವುದು.
ವಾರ್ಷಿಕ ಚಂದಾ :
ಕನಸಿನ ಭಾರತ ಪತ್ರಿಕೆಯ ಮೂಲಕ ಜನ ಜಾಗೃತಿ ಮತ್ತು ಮಾಹಿತಿ ಸುದ್ಧಿಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ. ಈ ಆಧುನಿಕ ಯುಗದಲ್ಲಿ ಓದುವ ಹವ್ಯಾಸಗಳು ಕಡಿಮೆ ಆಗುತ್ತಿದ್ದು, ಮೊಬೈಲ್ ಮತ್ತು ಟಿ.ವಿ ನೋಡುವ ಚಟಗಳಿಂದ ಮಾನವನ ಆರೋಗ್ಯದ ಮೇಲೆ ಹಲವಾರು ಕೆಟ್ಟ ಪರಿಣಾಮಗಳು ಆಗುತ್ತವೆ. ಓದುವುದರಿಂದ ಸುದ್ಧಿಯ ಆಳ-ಅಗಲ ಮತ್ತು ವಿಚಾರಗಳನ್ನು ತುಂಬ ಸರಳವಾಗಿ ಮತ್ತು ಸತ್ಯದ ಪರಿದಕ್ಷತೆಯಲ್ಲಿ ತಿಳಿದುಕೊಳ್ಳಬಹುದು. ಪತ್ರಿಕೆಗಳನ್ನು ಓದುವುದರಿಂದ ನೆನಪಿನ ಶಕ್ತಿ ಹೆಚ್ಚಾಗುವ ಮೂಲಕ ಮಾನವನ ಆರೋಗ್ಯ ಮೇಲೆ ಹಲವಾರು ಉತ್ತಮ ಪರಿಣಾಮಗಳು ಬೀರುತ್ತವೆ.ಕನಸಿನ ಭಾರತವು ಉತ್ತಮ ಸಮಾಜಕ್ಕಾಗಿ ಮತ್ತು ಸತ್ಯದ ಪ್ರತಿದ್ವನಿಯಾಗಿ,ವಿಚಾರ ಲೇಖನ ಮತ್ತು ಸುದ್ದಿಗಳನ್ನು ನೀಡುತ್ತದೆ. ವಾರ್ಷಿಕ ಚಂದಾ ಹಣವು ರೂ.500 ಆಗಿದ್ದು, ಕನಸಿನ ಭಾರತ ಬಗ್ಗೆ ಗೂಗಲನಲ್ಲಿ ನೋಡಿ ತಿಳಿದುಕೊಂಡು ವಾರ್ಷಿಕ ಚಂದಾದಾರ ಆಗುವ ಮೂಲಕ ಪತ್ರಿಕೆಯ ಬೆಳವಣೆಗೆಗೆ ಸಹಕರಿಸುವ ಜೊತೆಗೆ ತಮ್ಮ ಸುದ್ಧಿ ಮತ್ತು ಲೇಖನ ಓದುವ ಆಶೆ ಜೊತೆಗೆ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು. ಕನಸಿನ ಭಾರತ ಪತ್ರಿಕೆಯು ಕುಟುಂಬದ ಎಲ್ಲಾ ವಯೋಮಾನದ ಸದಸ್ಯರು ಓದುವತ್ತಿದ್ದು, ಚರಿತ್ರೆ,ಉದ್ಯೋಗ,ಕಾನೂನು,ಮಹಿಳೆ,ಕೃಷಿ, ವಿಜ್ಞಾನ, ಮನರಂಜನೆ,ರಾಜಕೀಯ,ಸಾಮಾಜಿಕ,ಶಿಕ್ಷಣ ಮತ್ತು ಅಡುಗೆ ಸೇರಿದಂತೆ ಹಲವಾರು ವಿಷಯಗಳ ಕುರಿತು ನಾಡಿನ ಪ್ರಸಿದ್ದ ಬರಹಗಾರರ ಲೇಖನಗಳನ್ನು ಚಿಕ್ಕದಾಗಿ,ಚೊಕ್ಕದಾಗಿ ಪ್ರಕಟಿಸಿ,ನಿಮ್ಮ ಓದುವ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ.
ವಾರ್ಷಿಕ ಚಂದಾ : 500 ರೂಪಾಯಿ ಮಾತ್ರ
ನಮ್ಮೊಂದಿಗೆ ನೀವು. ಕನಸಿನ ಭಾರತ ಅನ್ನು ದೇಶಾಭಿಮಾನವುಳ್ಳ ಯುವ ಪಡೆ ಕಟ್ಟಿ ಬೆಳೆಸುತ್ತಿದೆ, ದೇಶಾಭಿಮಾನ, ಭಾರತ ಭವಿಷ್ಯದ ಕನಸು ಕಾಣುವ ಪ್ರತಿಯೊಬ್ಬರು ಈ ವ್ಯವಸ್ಥೆಯಲ್ಲಿ ಭಾಗಿ ಆಗಬಹುದು. ನಮ್ಮಲ್ಲಿ ತಾವು ವರದಿಗಾರರಾಗಿ, ಮಾಹಿತಿ ನೀಡುವವರಾಗಿ, ಲೇಖನ,ಕಥೆ,ಕವನ,ಪರಿಚಯದಂತಹ ಬರಹಗಳನ್ನು ಮತ್ತು ಸ್ಥಳೀಯ ಸಮಸ್ಯೆಗಳು ಮತ್ತು ಸ್ಥಳೀಯ ವಿಶೇಷತೆಗಳ ಕುರಿತ ಸುದ್ಧಿ/ಲೇಖನಗಳನ್ನು ಬರೆಯಬಹುದು. ಪತ್ರಿಕೆಯ ವಾರ್ಷಿಕ ಚಂದಾ/ ಅಜೀವ ಸದಸ್ಯತ್ವ ಅಥವಾ ಪೋಷಕರು ಗೌರವ ಪೋಷಕರು ಆಗಬಹುದು. ಕನಸಿನ ಭಾರತ ಸಮೂಹದಲ್ಲಿ ವರದಿಗಾರರು, ಬೇರೆ-ಬೇರೆ ವಿಭಾಗದಲ್ಲಿ ಕೆಲಸ ಮಾಡುವ ಎಲ್ಲರೂ ಪಾಲುದಾರರಾಗಿರುತ್ತಾರೆ. ತಾವು ಕೂಡ ತಮ್ಮ ಬಿಡುವಿನ ಸಮಯದಲ್ಲಿ ಪತ್ರಿಕೆಯ ಕೆಲಸ ಮಾಡಬಹುದು. ದುಡಿಮೆಗೆ ತಕ್ಕ ಪ್ರತಿಫಲ ಜೊತೆಗೆ ದೇಶಾಭಿಮಾನ ಬೆಳೆಸುವ ಪ್ರಯತ್ನದಲ್ಲಿ ತಮ್ಮ ಸೇವೆಯೂ ಸೇರುತ್ತದೆ. ಬನ್ನಿ ಸೇರಿ, ಬಲಿಷ್ಠ ಭಾರತ ಕಟ್ಟಲು ಪ್ರತಿಯೊಬ್ಬರು ಕೈ ಜೋಡಿಸಿ.ಎಲ್ಲ ಹಂತದಲ್ಲೂ ನಮ್ಮೊಂದಿಗೆ ಕೈ ಜೋಡಿಸುವವರ ಸಲಹೆ ಸೂಚನೆಗಳನ್ನು ಮುಕ್ತ ಮನಸ್ಸಿನಿಂದ ನಾವು ಪಡೆಯುತ್ತೇವೆ.
ನಮ್ಮ ಟೀಮ್ ಅಥವಾ ಸಾರ್ವಜನಿಕರ ಗಮನಕ್ಕೆ
- ಪತ್ರಿಕೆ ಐ.ಡಿ ಕಾರ್ಡ್ ಕೇವಲ ನಿಮ್ಮ ಗುರುತಿಗಾಗಿ ಹೊರತು ದಬ್ಬಾಳಿಕೆ ಮಾಡಲು ಅಲ್ಲ. ಉತ್ತಮ ಕ್ರಿಯಾಶೀಲ ಪತ್ರಕರ್ತನಿಗೆ ಸೌಜನ್ಯತೆ ತಾಳ್ಮೆ ಅವಶ್ಯಕ. ನಾವು ಅದನ್ನು ತಮ್ಮಿಂದ ಬಯಸುತ್ತೇವೆ.ಯಾವುದೇ ನಮ್ಮ ವರದಿಗಾರರು ತಮ್ಮ ಹುದ್ದೆ ಅಥವಾ ಐ.ಡಿ ಕಾರ್ಡ್ ದುರುಪಯೋಗ ಪಡೆಸಿಕೊಳ್ಳುವುದು ಸಾರ್ವಜನಿಕರಿಗೆ ಕಂಡು ಬಂದರೆ ತಕ್ಷಣ 9916963121 ಸಂಪರ್ಕಿಸಿ.
- ಪತ್ರಿಕೆ ಹೆಸರಿನಲ್ಲಿ ಹಣ ವಸೂಲಿ ಮಾಡುವುದು ಅಧಿಕಾರಿಗಳು/ಸಾರ್ವಜನಿಕರನ್ನು ಹೆದರಿಸುವುದು ಕಂಡು ಬಂದರೆ ಯಾವುದೇ ಮುನ್ನಸೂಚನೆ ಇಲ್ಲದೆ ಹುದ್ದೆಯಿಂದ ತೆಗೆದು ಹಾಕಲಾಗುವುದು.
- ವರದಿಗಾರರು ಯಾವುದೇ ಸಂದರ್ಭದಲ್ಲೂ ಆಪೀಸಿನಿಂದ ಬರುವ ಕರೆಗಳನ್ನು ಸ್ವೀಕರಿಸಬೇಕು. ಮುಖ್ಯಸ್ಥರ ಆಜ್ಞೆಗಳನ್ನು ಪಾಲಿಸಬೇಕು.ಹೇಳುವ ಕೆಲಸಗಳನ್ನು ಮಾಡಲೇಬೇಕು.
- ಪುಲ್/ಪಾರ್ಟ್ ಟೈಮ್ ಯಾವುದೇ ವರದಿಗಾರರು ಕನಿಷ್ಠ ಜಾಹೀರಾತು ಪತ್ರಿಕೆ ಚಂದದಾರರನ್ನು ಮಾಡಿಸುವುದು ಮತ್ತು ವರದಿ ಕಳಿಸುವುದು ಕಡ್ಡಾಯವಾಗಿರುತ್ತದೆ.
- ಪತ್ರಿಕೆಯ ಸಭೆಗಳಿಗೆ ಕಡ್ಡಾಯವಾಗಿ ಹಾಜರಾಗಬೇಕು.
- ಹೊಸ ವರದಿಗಾರರಾಗಲು, ಪತ್ರಿಕೆ ಕಳಿಸುವುದು,ಸುದ್ಧಿ, ಜಾಹೀರಾತು, ಐ.ಡಿ ಕಾರ್ಡ್, ವಿ.ಸಿ ಬಗ್ಗೆ ಏನಾದರೂ ಮಾಹಿತಿ ಬೇಕಾದರೆ ಶ್ರೀ ಗಂಗಾಧರ್ 9148820080 (24X7) 08023100700/08023307404 ಸಂಪರ್ಕಿಸಿ.
- ಕಾನೂನು, ವಿಶೇಷ ಸುದ್ಧಿ, ನಮ್ಮ ವರದಿಗಾರರ ಬಗ್ಗೆ ಅಥವಾ ಆಪೀಸು ಸಂಬಂಧಿಸಿದಂತೆ ಚರ್ಚಿಸಲು ಸಂಪಾದಕರು 9916963121 (ಬೆಳಗ್ಗೆ 9.00ರಿಂದ ಸಂಜೆ 6.00 ವರೆಗೆ)
- ಜಾಹೀರಾತು ಹಣ/ ಚಂದಾ ಹಣವನ್ನು ಕನಸಿನ ಭಾರತ ಹೆಸರಿನಲ್ಲಿ ಡಿ.ಡಿ.ಅಥವಾ ಚೆಕ್ ಪಡೆಯಬೇಕು. ಯಾವುದೇ ವರದಿಗಾರರು ತಮ್ಮ ಹೆಸರಿನಲ್ಲಿ ಪಡೆಯುವುದನ್ನು ನಿಷೇಧಿಸಲಾಗಿದೆ.ಸಾರ್ವಜನಿಕರು ಹಣ ನೀಡಿದರೇ ಕಡ್ಡಾಯವಾಗಿ ರಶೀದಿ ಪಡೆಯಬೇಕು, ಡಿ.ಡಿ ಅಥವಾ ಚೆಕ್ ಅನ್ನು ಕನಸಿನ ಭಾರತ ಹೆಸರಿನಲ್ಲಿ ನೀಡಬೇಕು.
ಜಾಹೀರಾತು/ಚಂದಾ ಹಣವಾಗಿ ಬಂದರೇ
PhonePe / Google Pay 9916963121 ಅಥವಾ
KANASINA BHARATHA
STATE BANK OF INDIA
A/c no. 40078901279
IFSC CODE: SBIN0040323
Branch :Rajajinagar 4th Branch
ಖಾತೆಗಳಿಗೆ ಮಾತ್ರ ಸಂದಾಯ ಮಾಡಬೇಕು. ಬೇರೆ ಖಾತೆಗಳಿಗೆ ಜಮಾ ಮಾಡಿದ ಹಣಕ್ಕೆ ಕಂಪನಿ ಜವಾಬ್ದಾರಿ ಆಗುವುದಿಲ್ಲ.
10) ಸುದ್ಧಿ, ಲೇಖನ,ಕವನ, ಕಥೆ ಇನ್ನಿತರ ಬರಹಗಳನ್ನು ಕಡ್ಡಾಯವಾಗಿ- ಆನ್ ಲೈನ್ದಲ್ಲಿ ಪ್ರಕಟಿಸಲು WhatsApp no.9343996622 ಅಥವಾ e-mail kanasinabharath@gmail.com ಕಳಿಸಬೇಕು. ಪತ್ರಿಕೆಯಲ್ಲಿ ಪ್ರಕಟಣೆ ಮಾಡಲು WhatsApp no.9343996611 ಅಥವಾ e-mail kanasinabharath@gmail.com ಕಳಿಸಬೇಕು. ಬೇರೆ ಮೇಲ್ ಅಥವಾ ವಾಟ್ಸ್ಆಫ್ಗಳಿಗೆ ಕಳಿಸಲೇಬೇಡಿ.
11) ಚಂದಾ ಮತ್ತು ಜಾಹೀರಾತು ನೀಡುವವರಿಗೆ ಕಡ್ಡಾಯವಾಗಿ ರಶೀದಿ ನೀಡಲೇಬೇಕು/ಪಡೆಯಬೇಕು.
12) ಯಾವುದೇ ವಿಚಾರದಲ್ಲೂ ಸಂಪಾದಕರ ತಿರ್ಮಾಣವೇ ಅಂತಿಮ.
ಜಾಹೀರಾತು : ಜಾಹೀರಾತು ಮಾಧ್ಯಮದ ಜೀವಾಳ. ಅಭಿವೃದ್ಧಿ ಜೊತೆಗೆ ವಸ್ತು, ವ್ಯಕ್ತಿ, ಸಂಸ್ಥೆ ವಿಚಾರಗಳ ಪ್ರಚಾರವು ಅತ್ಯಂತ ಅವಶ್ಯಕತೆ ಇದೆ. ಯಾವುದೇ ಉತ್ಪನ್ನದ ಜಾಹೀರಾತು ಇಲ್ಲದೇ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಲಾರದು ಈ ಕಾರಣದಿಂದ ಸರ್ಕಾರ ಮತ್ತು ಕಂಪನಿಗಳು, ರಾಜಕಾರಣಿಗಳು ಸಂಘ-ಸಂಸ್ಥೆಗಳು ಸಾಕಷ್ಟು ಜಾಹೀರಾತನ್ನು ನೀಡುತ್ತಿದ್ದು ಆದರೆ ಎಲ್ಲ ಮಾಧ್ಯಮಕ್ಕಿಂತ ಮುದ್ರಣ ಮಾಧ್ಯಮದ ಜಾಹೀರಾತು ವಿಶ್ವಾರ್ಹತೆ ಮತ್ತು ಪರಿಣಾಮದಿಂದ ಕೂಡಿರುತ್ತದೆ ಅದರಲ್ಲೂ ಕನಸಿನ ಭಾರತ ಯಾವುದೇ ಜಾತಿ ಧರ್ಮ ಮತ್ತು ರಾಜಕೀಯ ಪಕ್ಷದ ಪ್ರತೀಕ ಅಲ್ಲದೇ ದೇಶದ ಅದರಲ್ಲೂ ದೇಶಾಭಿಮಾನ ಬೆಳೆಸುವ ಮಾದ್ಯಮ ಆಗಿರುವುದರಿಂದ ಕುಟುಂಬದ ಪತ್ರಿಕೆ ಕೂಡ ಆಗಿರುವುದರಿಂದ ಹೆಚ್ಚು ಜನರಿಗೆ ಜಾಹೀರಾತು ತಲುಪುತ್ತದೆ. ಆಧುನಿಕ ಯುಗದ ಜಾಹೀರಾತು ಆಯಾಮಗಳನ್ನು ಕೂಡ ಪರಿಚಯಿಸುತ್ತದೆ, ಹೊಸ ದೃಷ್ಟಿಕೋನದಲ್ಲಿ ಪ್ರಚಾರಕ್ಕೆ ಸಲಹೆ-ಸೂಚನೆ ಕೂಡ ಕೊಡಲಾಗುತ್ತದೆ.
ಆರೋಗ್ಯ,ಕಾನೂನು,ಲೇಖನ ಮತ್ತು ದೇಶಾಭಿಮಾನ ಬೆಳೆಸುವಂತಹ ಮಾಧ್ಯಮವು ಸಾರ್ವಕಾಲಿಕ ಜನರ ಮೆಚ್ಚುಗೆ ಮತ್ತು ಸಂಗ್ರಹವಾಗುವುದರಿಂದ ಜಾಹೀರಾತು ಹೆಚ್ಚು ಜನರಿಗೆ ತಲುಪಿ ಉತ್ತಮ ಪಲಿತಾಂಶ ಬರುತ್ತದೆ. ಈಗಾಗಲೇ 8 ವರ್ಷದಿಂದ ಪತ್ರಿಕೆಯು ಉಚಿತವಾಗಿ ಲಕ್ಷಾಂತರ ಜನರಿಗೆ ತಲುಪುತ್ತಿದೆ. ಆಸಕ್ತ ಓದುಗರು, ಗ್ರಂಥಾಲಯಗಳು, ಶಾಲಾ_ಕಾಲೇಜು, ಸಾರ್ವಜನಿಕ ಸ್ಥಳಗಳಿಗೆ ಉಚಿತವಾಗಿ ನೀಡುತ್ತಾ ಬಂದಿದ್ದೇವೆ, ಈಗ ಇನ್ನು ಒಂದು ಹೆಜ್ಜೆ ಮುಂದೆ ಸಾಗಿ 16,000 ಅಜೀವ ಸದಸ್ಯತ್ವ ಮತ್ತು ರೂ.1500 ಪಡೆದು ವಾರ್ಷಿಕ ಚಂದಾದಾರನಾಗಿಸಿ, ಕರ್ನಾಟಕ ಮನೆ ಮಾತನಾಗಿಸಲು ಕನಸಿನ ಭಾರತ ಎಲ್ಲ ರೀತಿಯ ಸಿದ್ದತೆಯನ್ನು ಮಾಡಿಕೊಂಡಿದೆ. ಈಗಾಗಲೇ ಪತ್ರಿಕೆ 20ಕ್ಕೂ ಅಧಿಕ ವೆಬ್ ತಾಣದಲ್ಲಿ ಪ್ರಕಟಗೊಳ್ಳುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲೂ ಪತ್ರಿಕೆ ಅತ್ಯಂತ ಕ್ರಿಯಾಶೀಲವಾಗಿದ್ದರಿಂದ ಜಾಹೀರಾತು ಅತ್ಯಂತ ಹೆಚ್ಚು ಜನರಿಗೆ ತಲುಪುತ್ತದೆ. ಪತ್ರಿಕೆ ಬೆಳವಣೆಗೆಗೆ ಮತ್ತು ತಮ್ಮ ಪ್ರಚಾರಕ್ಕಾಗಿ ದಯವಿಟ್ಟು ಜಾಹೀರಾತು ನೀಡಿ ಸಹಕರಿಸಿ.
Advertisement Rate Card
ರಮೇಶ.ಎಸ್.ಜಿ ಎಂ.ಎ, ಪಿ.ಜಿ.ಡಿ.ಕೆ.ಜೆ
ಸಂಪಾದಕರು.
ಸಂಪರ್ಕಿಸಿ
Information
- #1/1 Radhakrishna Complex 2ndFloor 204 DR. Rajkumar Road 6th Block, Rajajinagar- Bangalore-560010
- kanasinabharath@gmail.com
- +91 9916963121